ಶನಿವಾರ, ಆಗಸ್ಟ್ 21, 2010

ಬೇಸರ....


ಕಾಣದ ಸುಖಕೆ ನಾನೇಕೆ ಹಣಗಳಿಸ ಬ೦ದೆ
ಬಿಟ್ಟು ಮಡದಿ ಮಗುವ ನಾ ಬಹಳ ನೊ೦ದೆ
ದನಿಕೇಳಿ ದೂರವಾಣಿಲಿ ನಾ ಸ೦ತಸ ಪಡೆವೆ
ಪ್ರಿಯಮಡದಿ ಮಗುವ ನೋಡಲು ಹ೦ಬಲಿಸುವೆ

ಸೊಗಸು ಹೊರಗಡೆ ಮಾತ್ರ ಈ ಬಿಳಿಯೂರು
ಎಲ್ಲಕೊಚ್ಚೆ ಒಳಗಡೆ ಈ ಜನರು ಬರಿಬೋರು
ಮುಖವಾಡದವರಿವರು ಬೇಕಿವರಿಗೆ ಬರೆ ಕಾರು ಬಾರು
ಇ೦ದಿಗೂ ನಾವು ಕೀಳಿವರಿಗೆ ಅತ್ಮೀಯತೆಯಿಲ್ಲ ಚೂರು

ಬೇಡ ಕಣೋ ಈ ಕೆಲಸವೆ೦ದು ಮನ ಹೇಳುತಿದೆಯಲ್ಲ
ಆದರೂ ಹಣದ ಸಾಲ ನನ್ನ ಇಲ್ಲಿ ಕಟ್ಟಿ ಹಾಕಿದೆಯಲ್ಲ
ಹೊಗ್ಲಿ ಬಿಡು ಅರವತ್ತು ದಿನದಲ್ಲಿ ಹೊರಟು ಬಿಡುವೆನಲ್ಲ
ಬಾರಯ್ಯ ಅ೦ದ್ರೂ ಇನ್ನು ನಾನು ಒಬ್ಬನೇ ಬರೊಲ್ಲ

1 ಕಾಮೆಂಟ್‌: