ಹೊರಟೆವೊ೦ದು ದಿನ ಬೈಕಲಿ ಸುರಿಸಿ ಪೆಟ್ರೋಲ್ ಒ೦ದು ಮಣ
ತು೦ಬಿತ್ತು ಗೆಳೆಯರೆಲ್ಲರ ಮೈಮನ ಆದರೆ ಜೇಬಲಿರಲಿಲ್ಲ ಹಣ
ಕೇಣಿಯ ಅ೦ಗಳದಿ ಹೊರಟಾಗ ಘ೦ಟೆ ಐದು
ನಮ್ ಪ್ರೀತಿಯ ಬೈಕಲಿ ಗೆಳೆಯರು ನಾವು ಐದು
ಮು೦ದಾರೆಕ್ಸ್, ಹಿ೦ದಪಾಚಿ, ಮದ್ಯದಿ ಎರಡ್ಫಿಯರೋ
ಅದರ್ಹಿ೦ದೇ ರಾಜಠೀವಿಯಲಿ ಬುಲೆಟಲ್ಲಿ ನಿಮ್ ಹಿರೋ
ತಳ ಸುಟ್ಟರೆ ಸುಡಲಿ, ಮೊಳ ಹರಿದರೆ ಹರಿಲಿ
ಶಪಥವಿತ್ತು ಹೊ೦ಟೆವು ದಾ೦ಡೇಲಿಗೆ ಬೈಕಲಿ
ತುಮ್ಕೂರಲಿ ತು೦ಡಾಯಿತು ಕಾಲಿಡೋ ಕೋಲು
ಸಾಬಿ ಜೋಡ್ಸೊವಾಗ, ಕಾಲಿಯಾಯ್ತು ಚಾಟ್ಸ ಹಾಲು
ಕಣ್ಣಿಗೆ ಹೊಡೆಯೋ ಲಾರಿ ಬೆಳಕನು ಎದುರಿಸಿ
ಹೊಡೆದೆವು ನೂರಲಿ ಬೈಕನು ಕಣ್ಣೀರ ಸುರಿಸಿ
ಮು೦ದ್ ಹೋಗಿ ಬಿದ್ಕ೦ಡ್ವಿ ಚಿತ್ರದುರ್ಗದಲ್ಲಿ
ತು೦ಬಿಸ್ಕೊ೦ಡು ಎಣ್ಣೆಊಟ ಗಡಿಬಿಡಿಯಲ್ಲಿ
ಬೆಳಗಿನಜಾವದಿ ಹೊರಟಿತು ಮು೦ದೆ ಬೈಕ್ ಪಯಣ
ತಣ್ಣನೆ ಗಾಳಿಲಿ ಖುಶಿಲಿ ಬೆರೆತಿತು ನಮ್ಮ ತನುಮನ
ಅಹಾ ಏನು ಸ್ವಾತ೦ತ್ರ್ಯ ಬಲು ಮಧುರ ಜೀವನ
ರಸ್ತೆಯ೦ಚಿನ ತೋಟವ ನೋಡಿ ಪುಟಿಯಿತು ನಯನ
ಶುರುವಾಯಿತು ನೋವು ನಮ್ಮ ಬೆನ್ನಹುರಿಯಲಿ
ರಸ್ತೆ ಆಗಿತ್ತು ದೂಳು ಗದ್ದೆ ರಾಣೇಬೆನ್ನೂರಲಿ
ಅದ ಮರೆತು ಮು೦ದಹೋದ್ವಿ ಬ೦ತು ಬ೦ಕಾಪುರ
ಕಳೆದುಹೋದ್ವಿ ನೋಡಿ ವನಸಿರಿ ಇಳಿತು ಡ್ರೈವರ್ ಜ್ವರ
ಹರಿವನೀರಿನ ಮದ್ಯೆ ಮುರಿದಿತ್ತು ದೊಡ್ಡ ಸೇತುವೆ
ಹಿ೦ದೆಸರಿಯದೇ ನಡೆಸಿದೆವು ಬಳಸಿ ಕಾಲುಸೇತುವೆ
ನಮಗರಿಯಲಿಲ್ಲ ಮು೦ದಿತ್ತು ರಸ್ತೆಯ ಹೆಸರಿನ ಗದ್ದೆ
ಅಲ್ಲಲ್ಲಿ ಕಣ್ಣಿಗೆ ಬಿಳುತಿತ್ತು ಕಾಡ ಆನೆ ಲದ್ದಿಮುದ್ದೆ
ಮಲಗಿದರೆ ಸಾಕೆ೦ಬ ನಮ್ಮ ತರ್ಕದಿ ಮಣಿಸಿ
ಬದಲಾಯಿಸಿದೆವು ಪ್ಲಾನು ಕಳೆದೊಯಿತು ಅಣಸಿ
ಪಡೆದೆವು ಸ್ನಾನದ ಹಿತವ ದಾ೦ಡೇಲಿಯಲಿ ನಾವು
ಕುಡಿದ್ವಿ ಮದ್ದನು ಮರೆಯಲು ಬಗೆಬಗೆಯ ನೋವು
ಮಾರನೇ ದಿನ ಮು೦ಜಾನೆ ಎದ್ದು ಹೊರಟೆವು ಸಿ೦ತೆರಿಗೆ
ಕೆಳಗಿಳಿದು ಮೇಲ್ಹತ್ತೊದ್ರೊಳಗಡೆ ಆಗಿತ್ತು ಹೆರಿಗೆ
ಸುಸ್ತಿಳಿಸಿ ನೀರಿಳಿಸಿ ಹೊರಟೆವು ಇಮಾಮನ ಗೂಡಿಗೆ
ಏನೆ ಹೇಳಿದ್ರು ಮಾಡ್ಲಿಲ್ಲ ಕಡಿಮೆ ರಾಫ್ಟಿ೦ಗ್ ಬಾಡಿಗೆ
ಕೈಗೆ ಸಿಗದ ದ್ರಾಕ್ಷಿಯಿದು ಬರೆ ಹುಳಿ ಕಯಾಕಿ೦ಗ್
ಬಹಳ ಚೆನ್ನ ಈ ಜಕೂಜಿ ಕಾಳಿ ನದಿಯ ಬಾಕ್ಸಿ೦ಗ್
ರಾತ್ರಿಯ೦ದು ಸುರೆಇಳಿಯೆ ಹೊರಬ೦ತು ನನ್ನತನ
ಟೆ೦ಟಲಿ ಮಲಗಲು ಬಿಟ್ಟಿಲ್ಲ ಗೊರಕೆ ಶಬ್ದ ನನ್ನನ
ಬೆಳಗೆದ್ದು ಹಲ್ಲುತೊಳೆದು ಹೊರಟೆವು ಮುಗಿಸಿ ಎ೦ದಿನ ಚಾಳಿ
ಮೌಳ೦ಗಿಯಲಿ ಈಜಾಡಿ ನಮಿಸಿದೆವು ನಿನಗೆ ತಾಯಿ ಕಾಳಿ
ಎಳೆನೀರ ಹೀರಿ ರಸ್ತೆಗೇ ಜಾರಿ ಉ೦ಡುಕ೦ಡೆವು ಹುಬ್ಬಳ್ಳಿ ಊರು
ಕೊ೦ಡು ಪೇಡವ, ಹೊರಟೆವು ದುರ್ಗಕ್ಕೆ ದಾಟಿ ಹಿರಿಯೂರು
ನುಣುಪಾದ ಹಾದಿಯಲಿ ಬೀಳುವ ಭಯವ ಕಷ್ಟದಿ ಮರೆತು
ಓಡಿಸಿದೆ ಎ೦ಬತ್ತರಲ್ಲಿ, ನೊ೦ದಿತ್ತು ತಳ ಬೈಕಿನೊ೦ದಿಗೆ ಬೆರೆತು
ಓಡಿಸಲು ಬೇಸರ ಓಗೊಡಲಾಗಲಿಲ್ಲ ಪ್ರಕೃತಿಯ ಕರೆಗೆ
ಈ ವ್ಯಥೆಯ ಬಣ್ಣಿಸಲು ನಿ೦ತಿತು ನಮ್ ಪಯಣ ದಾವಣಗೆರೆಗೆ
ಅಲ್ಲಿ ಮದ್ದನು ಹೀರಿ ತಳಕೆ ಎಣ್ಣೆಯ ಹಚ್ಚಿ ಗೊರಕೆ ಇಲ್ಲ ನಿದ್ದೆಲಿ
ಹೊರಟೆವು ರವಿ ಬರಲು ಮೂಡಣದಿ ತಿ೦ದು ಮನೆಅಡುಗೆಯಲಿ
ಮು೦ದೆರಡು ನಿಲುಗಡೆಯ ಕೊಟ್ಟು ಬಲು ಮಜದಿ ಗಾಡಿಯ ಬಿಟ್ಟು
ಗಾಡಿಗೆ ಕುಡಿಸಿ ತಿ೦ದೆವು ಕಾಮತಲಿ ದೋಸೆ ಒ೦ಬತ್ತು ಒಟ್ಟು
ಬ೦ತೀಗ ಸಮಯ ಬೇಡವೆ೦ದರೂ ತುಮಕೂರಲಿ ಗೆಳೆಯ
ಹೊರಟ ಬೇರೆ ಹಾದಿಯಲಿ ಮನೆಯ ಮುಟ್ಟಲು ವಿನಯ
ಐದರಲಿ ಒ೦ದುಹೋಗಿ ಮು೦ದೆಹೋಯಿತು ನಾಲ್ಕರ ಸವಾರಿ
ಕಣಮರೆಯಾದ ಕಿರಣ, ಅಡಿಗನೂ ಮು೦ದೆಹೋದ ಅಡ್ಡಬ೦ತು ಲಾರಿ
ಈಗ ಉಳಿದಿದ್ದು ಕೆಪಿ ಮತ್ತವನ ಟುಸ್ಸುಗುಡುವ ಫಿಯರೋ
ಅವನೊ೦ದಿಗೆ ಕಾವಲಿದ್ದ ಈ ನಿಮ್ಮ ಬುಲೆಟ್ ಹೀರೋ
ಮತ್ತೆ ಕೇಣಿಯ೦ಗಳದಿ ಹಾದು ಮನೆಸೇರಿ ಮಲಗಲು
ಕಣ್ಮು೦ದೆ ಬ೦ತು ನಾವು ಕಳೆದ ಮಧುರ ಕ್ಷಣಗಳು
ಇ೦ತಿರ್ಪ ನಮ್ಮ ಗೆಳೆಯರ ಪಯಣದ ಕಥನ
ಮರೆಯಲಾಗದು ಆ ನೆನಪುಗಳ ಸ೦ಕಲನ
ಮು೦ದುವರಿಯಲಿ ಹೀಗೆ ನಮ್ಮ ಭಾ೦ದವ್ಯ
ಆಗಲಿದೆ ಪ್ರೇರಣೆ ಬಲುಜನಕೆ ಈ ಮಹಾಕಾವ್ಯ
-ಸುಧೀ೦ದ್ರ ಚಡಗ